ನಿರಂತರ ಸುರಿದ ಮಳೆಗೆ ಈರುಳ್ಳಿ ಬೆಳೆ ನಾಶ

ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿ ಗ್ರಾಮದಲ್ಲಿ ರೈತ ಮಂಜುನಾಥ್ ರೆಡ್ಡಿ ಎಂಬುವರು ತಮ್ಮ ನಾಲ್ಕು ಎಕರೆ ಜಾಗದಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ , ಉತ್ತಮ ಫಸಲು ಬಂದು ಕಟಾವಿನ ಹಂತದಲ್ಲಿದ್ದ ಬೆಳೆ ಸತತ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆಯಲ್ಲಿ ಕೊಳೆ ರೋಗ ಹಾಗೂ ರೆಕ್ಕೆ ರೋಗ ಕಾಣಿಸಿಕೊಂಡಿತು. ಇದೀಗ ಬೆಳೆ ಸಂಪೂರ್ಣ ನಾಶವಾದ ಹಿನ್ನೆಲೆ ಇತ್ತ ಬೆಳೆಯೂ ಇಲ್ಲದೆ, ಖರ್ಚು ಮಾಡಿದ ಹಣವೂ ಕೈ ಸೇರದೆ ಇದ್ದು ರೈತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸರ್ಕಾರ ಈ ನೊಂದ ರೈತನ ನೆರವಿಗೆ ಬರಬೇಕಿದೆ.
