ಮಾದಿಗರೇ ಮಾತನಾಡಬೇಡಿ ನಾಗಮೋಹನ್ ದಾಸ್ ಆಯೋಗದ ವರದಿ ಆಗಸ್ಟ್ 16ರಂದು ಜಾರಿಗೊಳ್ಳುವುದು ಖಚಿತ
ಚಿತ್ರದುರ್ಗ:ಮಾದಿಗರೇ ಮಾತನಾಡಬೇಡಿ ನಾಗಮೋಹನ್ ದಾಸ್ ಆಯೋಗದ ವರದಿ ಆಗಸ್ಟ್ 16ರಂದು ಜಾರಿಗೊಳ್ಳುವುದು ಖಚಿತ ಎಂದು ಮಾಜಿ ಸಚಿವ ಎಚ್. ಆಂಜನೇಯ ಭವಿಷ್ಯ ನುಡಿದರು. ಈ ಮಧ್ಯೆ ಕೆಲವರು ವರದಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಗೊಂದಲ ಮೂಡಿಸುವ ಷಡ್ಯಂತ್ರ ಎಂದು ಮಾಜಿ ಸಚಿವ ಆಂಜನೇಯ ಆರೋಪಿಸಿದ್ದಾರೆ.
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸುದ್ದು ಗೋಷ್ಠಿ ನೆಡಿಸಿದ ಅವರು ಮಾದಿಗರ ಸಮುದಾಯ ಯಾವ ಕಾರಣಕ್ಕೂ ಕೇಳಬಾರದು, ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ನುಡಿದಂತೆ ನಡೆಯುವ ನಾಯಕ. ಎಂತಹ ಅಡೆತಡೆಗಳು ಎದುರಾದರೂ ಒಳಮೀಸಲಾತಿ ಜಾರಿ ಮಾಡೇ ಮಾಡುತ್ತಾರೆ.ಇದಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಡಾ.ಜಿ.ಪರಮೇಶ್ವರ್ ಸೇರಿ ಎಲ್ಲ ಸಮುದಾಯದ ಸಚಿವರು, ಶಾಸಕರು ಬೆಂಬಲವಾಗಿದ್ದಾರೆ. ಉದ್ಯೋಗ ನೇಮಕಾತಿಗಳಿಗೆ ತಡೆ ಹಾಕಿರುವುದೇ ಒಳಮೀಸಲಾತಿ ಜಾರಿ ಖಚಿತವೆಂಬ ಗ್ಯಾರಂಟಿ ಆಗಿದೆ. ಈ ವಿಷಯದಲ್ಲಿ ಆತಂಕ ಬೇಕಿಲ್ಲ, ಆದ್ದರಿಂದ ಮಾದಿಗರು ಯಾವುದೇ ಕಾರಣಕ್ಕೂ ಪ್ರತಿಯಾಗಿ ಮಾತನಾಡದೆ ಮೌನವಾಗಿರಬೇಕು ಎಂದುಮಾಜಿ ಸಚಿವ ಎಚ್, ಆಂಜನೇಯ ಕಿವಿಮಾತು ಹೇಳಿದರು. ಅಲ್ಲದೆ ಆಸ್ತಿ ಹಂಚಿಕೆ ಸೌಹಾರ್ಧದಲ್ಲಿ 70 ವರ್ಷಕ್ಕೂ ಹೆಚ್ಚು ಒಟ್ಟು ಕುಟುಂಬ ನಡೆಸಿದ ಅಣ್ಣ-ತಮ್ಮಂದಿರು ಸೌಹಾರ್ಧತೆಯಿಂದ ಆಸ್ತಿ ಹಂಚಿಕೆ ಮಾಡಿಕೊಂಡು ಮೊದಲಿನಂತೆ ಪ್ರೀತಿ-ವಿಶ್ವಾಸದಿಂದಲೇ ಜೀವನ ನಡೆಸುವ ಕ್ರಮವೇ ಒಳಮೀಸಲಾತಿ ಜಾರಿಗೊಳ್ಳುತ್ತಿರುವ ಮೂಲಕ ಉದ್ದೇಶ. ಆದರೆ, ಇದನ್ನು ಸಹಿಸಿದ, ಸಾಮಾಜಿಕ ನ್ಯಾಯದ ಪರಿಪಾಲನೆ ಹಾಗೂ ಸಂವಿಧಾನದ ವಿರೋಧಿಗಳು ವಿರೋಧ ಮಾಡುತ್ತಿದ್ದಾರೆ. ಅವರ ಸಂಖ್ಯೆ ಬೆರಳೆಣಿಕೆಯಲ್ಲಿದೆ ಎಂದರು.
