ರೈತರಿಗೆ ಮಳೆ ಬೆಳೇ ಸಮೃದ್ಧಿಗಾಗಿ 110 ಕಿಲೋಮೀಟರ್ ಪಾದಯಾತ್ರೆ

ರಾಯಚೂರು: ಐದು ವರ್ಷಕೊಮ್ಮೆ ಐದು ಬಿಂದಿಗೆ ನೀರು ಐದು ದೇವರಿಗೆ ಜಾಲಾಭಿಷೇಕ ಪೂಜೆ ಸಲ್ಲಿಸಲಾಯಿತು. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಐತಿಹಾಸಿಕ ತಾಣವಾದ ಲಾಳೇ ಮಾಶಾಕ್ ದರ್ಗಾ ಅನಾದಿಕಾಲದಿಂದಲೂ ತಲೆ ತಲಾಂತರದಿಂದ ನಡೆದು ಬಂದ ಸಂಪ್ರದಾಯ, ಮೌನಚರಣೆಯ ಮೂಲಕ ನೀರು ಹೊತ್ತು ತಂದ ಯುವಕರು, ಕಾಲುದಾರಿಯಲ್ಲಿ 55 ಕಿಲೋಮೀಟರ್ ನಡೆದು ಕೃಷ್ಣಾ ನದಿಯ ಪವಿತ್ರ ಜಲವನ್ನು ಬಿಂದಿಗೆಯಲ್ಲಿ ಹೊತ್ತು ಲಾಳೇ ಮಾಶಾಕ್ ದರ್ಗಾದ ದೇವರಿಗೆ ಜಾಲಾಭಿಷೇಕ ಮಾಡಲಾಗುತ್ತದೆ. ಪವಿತ್ರ ನೀರನ್ನು ಅರ್ಪಿಸಿದ ಕೆಲವೇ ಕ್ಷಣಗಳಲ್ಲಿ ಮಳೆ ಸುರಿದಿದೆ ಮತ್ತು ಐದು ವರ್ಷಕ್ಕೆ ಒಂದು ಬಾರಿ ಸಿಹಿ ಅನ್ನದ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಇನ್ನು ಈ ದೇವಾಲಯಕ್ಕೆ ರಾಜ್ಯವಲ್ಲದೆ ಅನ್ಯ ರಾಜ್ಯದಿಂದ ಕೂಡಾ ಲಾಳೆ ಮಾಶಾಕ್ ದರ್ಗಾಕ್ಕೆ ನೀಡುತ್ತಿರುವ ಭಕ್ತರು ಭೇಟಿ ನೀಡುತ್ತಾರೆ.
