ಹುಬ್ಬಳ್ಳಿ : ತಾಯಿ ಒಬ್ಬಳು ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯ ಮಗನ ಜೊತೆ ಜೀವನ ನಡೆಸುತ್ತಿದ ತಾಯಿ ಇಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿ ಕೇಶವಪುರ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಮಹಿಳೆ ಇಂದು ಆಕಸ್ಮಿಕ ಮೃತಪಟ್ಟಿದ್ದು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಿನನಿತ್ಯ ಓರ್ವ ಮಗ ಬಿಕ್ಷೆ ಬೇಡಿಕೊಂಡು ಬಂದು, ತನ್ನ ತಾಯಿ ಹಾಗೂ ತಮ್ಮನಿಗೆ ಊಟವನ್ನು ತಂದು ಕೊಡುತ್ತಿದ್ದ. ವಾಸಿಸಲು ಮನೆಯೂ ಸಹ ಇಲ್ಲದೆ ಬಸ್ ನಿಲ್ದಾಣದಲ್ಲಿ ಜೀವನ ಕಟ್ಟಿಕೊಂಡು ಜೀವ ಸಾಗಿಸುತ್ತಿದ್ದರು. ತಾಯಿ ಬಸ್ ನಿಲ್ದಾಣದಲ್ಲಿ ತನ್ನ ಓರ್ವ ಬುದ್ಧಿಮಾಂದ್ಯ ಮಗನನ್ನು ನೋಡಿಕೊಳ್ಳುತ್ತಿದ್ದಳು. ಇತ್ತ ಮಗ ಬಿಕ್ಷೆ ಬೇಡಲು ಹೋಗುತ್ತಿದ್ದ ಇಂದು ತಾಯಿ ಸಾವನಪ್ಪಿದ್ದು. ದೃಶ್ಯವನ್ನು ನೋಡಿದ ಅಲ್ಲಿನ ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ.
